ಅಧಿಕಾರಕ್ಕಾಗಿ ಬಿಎಸ್‌ವೈ ಹೋರಾಟ ಮಾಡಿದವರಲ್ಲ: ಬಿ ವೈ ವಿಜಯೇಂದ್ರ

ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಬಿ.ಎಸ್‌.ಯಡಿಯೂರಪ್ಪ ಅಭಿಮಾನೋತ್ಸವ ಸಭೆಯಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ.

—Advertisement—

ಚಿತ್ರದುರ್ಗ: ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಜನರಿಗಾಗಿ ಅವರ ಹೋರಾಟ ಮಾಡಿದವರು. ಅಧಿಕಾರಕ್ಕೇರಿ ವಿಧಾನ ಸೌಧದ ಮೂರನೇ ಮಹಡಿಗೆ ಹೋಗಬೇಕು ಎಂದು ಅವರು ರಾಜಕಾರಣ ಮಾಡಿದವರಲ್ಲ. ಐದು ದಶಕಗಳ ಕಾಲ ನಾಡಿನ ರೈತರ, ಬಡವರ, ಶೋಷಿತರ ಕಣ್ಣೀರು ಒರೆಸುವ ಸಲುವಾಗಿ ಹೋರಾಟ ಮಾಡಿದವರು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ನಗರದ ವಾಲ್ಮೀಕಿ‌ ಭವನದಲ್ಲಿ ಭಾನುವಾರ ನಡೆದ
ಬಿ.ಎಸ್‌.ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.

by-vijayendra-bsy-abhimanotsava-meeting

ಬಿಎಸ್‌ವೈ ಅವರು ಶೋಷಿತರ ಧ್ವನಿಯಾಗಿ ನಿಂತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ಇಡೀ ನಾಡಿಗೆ ಗೊತ್ತಿದೆ ಎಂದರು.

ಅಧಿಕಾರ ಬಂದಾಗ ಎಲ್ಲವೂ ಮರೆತುಹೋಗುತ್ತದೆ. ಆದರೆ ಬಿಎಸ್‌ವೈ ಅವರು ಅಪರೂಪದ ರಾಜಕಾರಣಿ. ವಿರೋಧ ಪಕ್ಷದಲ್ಲಿದ್ದಾಗ ಕಾರ್ಯಕರ್ತರನ್ನು ಯಾವ ರೀತಿ ನೋಡುತ್ತಿದ್ದರೂ ಅದೇ ರೀತಿ ಮುಖ್ಯಮಂತ್ರಿಯಾದಾಗಲೂ ನೋಡುತಿದ್ದರು. ಅದಕ್ಕಿಂತ ಹೆಚ್ಚು ಪ್ರೀತಿ, ಅಭಿಮಾನ ತೋರಿಸುತ್ತಿದ್ದರು ಎಂದು ಬಣ್ಣಿಸಿದರು.

ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಚಾಮರಾಜನಗರದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮಾರನೇ ದಿನವೇ ಹೆಲಿಕಾಪ್ಟರ್‌ ಬುಕ್‌ ಮಾಡಿಸಿ ಮೃತ ಕಾರ್ಯಕರ್ತನ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಂತಹ ಮಾನವೀಯತೆಯ ಹೃದಯ ಅವರದು ಎಂದರು.

by-vijayendra-bsy-abhimanotsava-meeting

ಬೆಂಗಳೂರಿನಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಅಭಿಮಾನಿಗಳು, ಕಾರ್ಯಕರ್ತರು ದೂರದ ಊರಿನಿಂದ ಬಂದಿದ್ದರೆ ಅವರಿಗೆ ಏನಾದರೂ ಅನಾನುಕೂಲವಾಗಿದೆಯೇ ಎಂದು ಪರಿಶೀಲಿಸುತ್ತಿದ್ದರು. ಬಂದವರು ಮರಳುವಾಗ ಏನಾದರೂ ಆಗಿದೆಯೇ ಎಂದು ಕೇಳುತ್ತಿದ್ದರು. ನಾಲ್ಕು ಬಾರಿ ಸಿಎಂ ಆದರೂ ಕಾರ್ಯಕರ್ತರ ಮೇಲೆ ಅದೇ ಕಾಳಜಿ, ಪ್ರೇಮ, ಅಭಿಮಾನ ಇಟ್ಟುಕೊಂಡಿರುತ್ತಿದ್ದರು ಎಂದು ವಿವರಿಸಿದರು.

ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಬಸ್‌ ಹಾಗೂ ಕಾರುಗಳಲ್ಲಿ ಬರ್ತಾ ಇದ್ದಾರೆ. ದುಬೈನಿಂದಲೂ ಬರುತ್ತೇವೆ ಎಂದು ಕರೆ ಮಾಡಿದ್ದಾರೆ. ಇದು ಯಶಸ್ಸು ಆಗುವಲ್ಲಿ ಪ್ರಬಂಧಕರ ಜವಾಬ್ದಾರಿ ಹೆಚ್ಚಿದೆ. ಯಾರು ಯಾರು ಯಾವ ಜವಾಬ್ದಾರಿ ತೆಗೆದುಕೊಂಡಿದ್ದೀರೋ ಅದನ್ನು ಸರಿಯಾಗಿ ನಿರ್ವಹಿಸಿ ಎಂದರು ಮನವಿ ಮಾಡಿದರು.

ಅಧಿಕಾರಕ್ಕಾಗಿ ಬಿಎಸ್‌ವೈ ಹೋರಾಟ ಮಾಡಿದವರಲ್ಲ: ಬಿ ವೈ ವಿಜಯೇಂದ್ರ

ಚಿತ್ರದುರ್ಗ: ಬಿ.ಎಸ್‌. ಯಡಿಯೂರಪ್ಪ ಅವರು ಅಧಿಕಾರಕ್ಕಾಗಿ ಎಂದು ಹೋರಾಟ ಮಾಡಿದವರಲ್ಲ. ಜನರಿಗಾಗಿ ಅವರ ಹೋರಾಟ ಮಾಡಿದವರು. ಅಧಿಕಾರಕ್ಕೇರಿ ವಿಧಾನ ಸೌಧದ ಮೂರನೇ ಮಹಡಿಗೆ ಹೋಗಬೇಕು ಎಂದು ಅವರು ರಾಜಕಾರಣ ಮಾಡಿದವರಲ್ಲ. ಐದು ದಶಕಗಳ ಕಾಲ ನಾಡಿನ ರೈತರ, ಬಡವರ, ಶೋಷಿತರ ಕಣ್ಣೀರು ಒರೆಸುವ ಸಲುವಾಗಿ ಹೋರಾಟ ಮಾಡಿದವರು ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

ನಗರದ ವಾಲ್ಮೀಕಿ‌ ಭವನದಲ್ಲಿ ಭಾನುವಾರ ನಡೆದ
ಬಿ.ಎಸ್‌.ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವ ತಯಾರಿ ಸಭೆಯಲ್ಲಿ ಮಾತನಾಡಿದರು.

ಬಿಎಸ್‌ವೈ ಅವರು ಶೋಷಿತರ ಧ್ವನಿಯಾಗಿ ನಿಂತಿದ್ದಾರೆ. ಅವರ ವ್ಯಕ್ತಿತ್ವದ ಬಗ್ಗೆ ಇಡೀ ನಾಡಿಗೆ ಗೊತ್ತಿದೆ ಎಂದರು.

ಅಧಿಕಾರ ಬಂದಾಗ ಎಲ್ಲವೂ ಮರೆತುಹೋಗುತ್ತದೆ. ಆದರೆ ಬಿಎಸ್‌ವೈ ಅವರು ಅಪರೂಪದ ರಾಜಕಾರಣಿ. ವಿರೋಧ ಪಕ್ಷದಲ್ಲಿದ್ದಾಗ ಕಾರ್ಯಕರ್ತರನ್ನು ಯಾವ ರೀತಿ ನೋಡುತ್ತಿದ್ದರೂ ಅದೇ ರೀತಿ ಮುಖ್ಯಮಂತ್ರಿಯಾದಾಗಲೂ ನೋಡುತಿದ್ದರು. ಅದಕ್ಕಿಂತ ಹೆಚ್ಚು ಪ್ರೀತಿ, ಅಭಿಮಾನ ತೋರಿಸುತ್ತಿದ್ದರು ಎಂದು ಬಣ್ಣಿಸಿದರು.

ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ಚಾಮರಾಜನಗರದ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಮಾರನೇ ದಿನವೇ ಹೆಲಿಕಾಪ್ಟರ್‌ ಬುಕ್‌ ಮಾಡಿಸಿ ಮೃತ ಕಾರ್ಯಕರ್ತನ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಂತಹ ಮಾನವೀಯತೆಯ ಹೃದಯ ಅವರದು ಎಂದರು.

ಬೆಂಗಳೂರಿನಲ್ಲಿ ಯಾವುದಾದರೂ ಕಾರ್ಯಕ್ರಮಗಳಿಗೆ ಅಭಿಮಾನಿಗಳು, ಕಾರ್ಯಕರ್ತರು ದೂರದ ಊರಿನಿಂದ ಬಂದಿದ್ದರೆ ಅವರಿಗೆ ಏನಾದರೂ ಅನಾನುಕೂಲವಾಗಿದೆಯೇ ಎಂದು ಪರಿಶೀಲಿಸುತ್ತಿದ್ದರು. ಬಂದವರು ಮರಳುವಾಗ ಏನಾದರೂ ಆಗಿದೆಯೇ ಎಂದು ಕೇಳುತ್ತಿದ್ದರು. ನಾಲ್ಕು ಬಾರಿ ಸಿಎಂ ಆದರೂ ಕಾರ್ಯಕರ್ತರ ಮೇಲೆ ಅದೇ ಕಾಳಜಿ, ಪ್ರೇಮ, ಅಭಿಮಾನ ಇಟ್ಟುಕೊಂಡಿರುತ್ತಿದ್ದರು ಎಂದು ವಿವರಿಸಿದರು.

ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರ ಬಸ್‌ ಹಾಗೂ ಕಾರುಗಳಲ್ಲಿ ಬರ್ತಾ ಇದ್ದಾರೆ. ದುಬೈನಿಂದಲೂ ಬರುತ್ತೇವೆ ಎಂದು ಕರೆ ಮಾಡಿದ್ದಾರೆ. ಇದು ಯಶಸ್ಸು ಆಗುವಲ್ಲಿ ಪ್ರಬಂಧಕರ ಜವಾಬ್ದಾರಿ ಹೆಚ್ಚಿದೆ. ಯಾರು ಯಾರು ಯಾವ ಜವಾಬ್ದಾರಿ ತೆಗೆದುಕೊಂಡಿದ್ದೀರೋ ಅದನ್ನು ಸರಿಯಾಗಿ ನಿರ್ವಹಿಸಿ ಎಂದರು ಮನವಿ ಮಾಡಿದರು.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp