ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಪಡಿತರ ಚೀಟಿದಾರರಿಗೆ ಪ್ರಮುಖ ಸುದ್ದಿಯೊಂದಿದೆ. ಮೇ ಮತ್ತು ಜೂನ್-2026ರ ಎರಡು ತಿಂಗಳ ಆಹಾರಧಾನ್ಯವನ್ನು ಪ್ರಸ್ತುತ ಜೂನ್ ತಿಂಗಳಲ್ಲೇ ಒಟ್ಟಿಗೆ ವಿತರಿಸಲು ಸರ್ಕಾರ ನಿರ್ದೇಶನ ನೀಡಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ರಾಮ ಮಾರಿಹಾಳ ತಿಳಿಸಿದ್ದಾರೆ.
ಅರ್ಹ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ, ಬಯೋಮೆಟ್ರಿಕ್ (ಬೆರಳುಚ್ಚು) ನೀಡುವ ಮೂಲಕ ಉಚಿತ ಆಹಾರಧಾನ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಯಾರಿಗೆ ಎಷ್ಟು ಅಕ್ಕಿ ಸಿಗಲಿದೆ? (ಸದಸ್ಯರ ಸಂಖ್ಯೆಯ ಆಧಾರದ ಮೇಲೆ):
ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಮತ್ತು ಕುಟುಂಬದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಕಾರ್ಡ್ದಾರರಿಗೆ ಮೇ ಹಾಗೂ ಜೂನ್ ತಿಂಗಳ ಕೋಟಾವನ್ನು ಸೇರಿಸಿ ಈ ಕೆಳಗಿನಂತೆ ಉಚಿತ ಅಕ್ಕಿ ವಿತರಿಸಲಾಗುತ್ತದೆ:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
-
04 ಸದಸ್ಯರಿರುವ ಕಾರ್ಡ್ಗೆ: 10 ಕೆ.ಜಿ ಅಕ್ಕಿ
-
05 ಸದಸ್ಯರಿರುವ ಕಾರ್ಡ್ಗೆ: 30 ಕೆ.ಜಿ ಅಕ್ಕಿ
-
06 ಸದಸ್ಯರಿರುವ ಕಾರ್ಡ್ಗೆ: 50 ಕೆ.ಜಿ ಅಕ್ಕಿ
-
07 ಸದಸ್ಯರಿರುವ ಕಾರ್ಡ್ಗೆ: 70 ಕೆ.ಜಿ ಅಕ್ಕಿ
-
08 ಸದಸ್ಯರಿರುವ ಕಾರ್ಡ್ಗೆ: 90 ಕೆ.ಜಿ ಅಕ್ಕಿ
-
09 ಸದಸ್ಯರಿರುವ ಕಾರ್ಡ್ಗೆ: 110 ಕೆ.ಜಿ ಅಕ್ಕಿ
-
10 ಸದಸ್ಯರಿರುವ ಕಾರ್ಡ್ಗೆ: 130 ಕೆ.ಜಿ ಅಕ್ಕಿ (ಗಮನಿಸಿ: 10ಕ್ಕಿಂತ ಹೆಚ್ಚು ಸದಸ್ಯರಿದ್ದರೆ ಇದೇ ಅನುಪಾತದ ಆಧಾರದಲ್ಲಿ ಹೆಚ್ಚುವರಿ ಅಕ್ಕಿ ನೀಡಲಾಗುತ್ತದೆ).
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆದ್ಯತಾ ಪಡಿತರ ಚೀಟಿ (PHH/BPL) ಹೊಂದಿರುವ ಗ್ರಾಹಕರಿಗೆ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ.ಯಂತೆ ಉಚಿತ ಅಕ್ಕಿ ದೊರೆಯಲಿದೆ.

ಇವರಿಗೆ ಜೂನ್ ತಿಂಗಳಲ್ಲಿ ಪಡಿತರ ಇರುವುದಿಲ್ಲ!
1 ರಿಂದ 3 ಸದಸ್ಯರಿರುವ ಅಂತ್ಯೋದಯ ಪಡಿತರ ಚೀಟಿಗಳಿಗೆ ಎನ್.ಎಫ್.ಎಸ್.ಎ (NFSA) ಯೋಜನೆಯಡಿ ಈಗಾಗಲೇ ಮೇ ತಿಂಗಳಲ್ಲೇ 2 ತಿಂಗಳ ಕೋಟಾವನ್ನು (ಮೇ ತಿಂಗಳ 35 ಕೆ.ಜಿ ಮತ್ತು ಜೂನ್ ತಿಂಗಳ 35 ಕೆ.ಜಿ ಸೇರಿ ಒಟ್ಟು 70 ಕೆ.ಜಿ ಅಕ್ಕಿ ಹಾಗೂ ರಾಗಿ) ವಿತರಿಸಲಾಗಿದೆ. ಹೀಗಾಗಿ, ಈ ವರ್ಗದ ಕಾರ್ಡ್ದಾರರಿಗೆ ಜೂನ್ ಮಾಹೆಯಲ್ಲಿ ಯಾವುದೇ ಹೆಚ್ಚುವರಿ ಹಂಚಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಕಡಿಮೆ ರೇಷನ್ ಕೊಟ್ಟರೆ ಅಥವಾ ಹಣ ಕೇಳಿದರೆ ಇಲ್ಲಿ ದೂರು ನೀಡಿ:
ನ್ಯಾಯಬೆಲೆ ಅಂಗಡಿಯ ಮಾಲೀಕರು ಅಥವಾ ಕಾರ್ಯದರ್ಶಿಗಳು ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಕಡಿಮೆ ಪ್ರಮಾಣದ ಪಡಿತರ ನೀಡಿದಲ್ಲಿ ಅಥವಾ ಉಚಿತ ಅಕ್ಕಿಗೆ ಹಣ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ತಕ್ಷಣವೇ ದೂರು ದಾಖಲಿಸಬಹುದು.
-
ರಾಜ್ಯ ಸಹಾಯವಾಣಿ ಸಂಖ್ಯೆ: 1967
-
ಅಥವಾ ಚಿತ್ರದುರ್ಗ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿ/ಸ್ಥಳೀಯ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ದೂರು ನೀಡಲು ಕೋರಲಾಗಿದೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
