ಚಿತ್ರದುರ್ಗದ ಜನರೇ ಗಮನಿಸಿ: ಇಂದು ನಗರದ ಈ ಪ್ರಮುಖ ಪ್ರದೇಶಗಳಲ್ಲಿ ದಿನವಿಡೀ ವಿದ್ಯುತ್ ವ್ಯತ್ಯಯ!

—Election Update—

ಚಿತ್ರದುರ್ಗ: ನಗರದ ಹಲವು ಬಡಾವಣೆಗಳ ನಿವಾಸಿಗಳಿಗೆ ಪ್ರಮುಖ ಸೂಚನೆಯೊಂದನ್ನು ನೀಡಲಾಗಿದೆ. ಚಿತ್ರದುರ್ಗ ನಗರದ ಉಪವಿಭಾಗ ಘಟಕ ಒಂದರ ವ್ಯಾಪ್ತಿಯಲ್ಲಿ ತುರ್ತು ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ನಾಳೆ (ಮೇ 19) ಪ್ರಮುಖ ಪ್ರದೇಶಗಳಲ್ಲಿ ದಿನವಿಡೀ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ (BESCOM) ಪ್ರಕಟಣೆ ತಿಳಿಸಿದೆ.

ಯಾವ ಸಮಯದಲ್ಲಿ ಕರೆಂಟ್ ಇರುವುದಿಲ್ಲ?

11 ಕೆವಿ ಎಫ್-3 ಬ್ಯಾಂಕ್ ಕಾಲೋನಿ ಮಾರ್ಗದಲ್ಲಿ ತುರ್ತು ತಾಂತ್ರಿಕ ಕಾಮಗಾರಿ ನಡೆಯಲಿದ್ದು, ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ಒಟ್ಟು 8 ಗಂಟೆಗಳ ಕಾಲ ವಿದ್ಯುತ್ ಕೈಕೊಡಲಿದೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರಮುಖ ಪ್ರದೇಶಗಳು:

ಬೆಸ್ಕಾಂ ಮಾಹಿತಿ ಪ್ರಕಾರ, ಈ ಕೆಳಗಿನ ಬಡಾವಣೆ ಹಾಗೂ ಸುತ್ತಮುತ್ತಲಿನ ಜಾಗಗಳಲ್ಲಿ ವಿದ್ಯುತ್ ಸಂಪರ್ಕ ಇರುವುದಿಲ್ಲ:

  • ಬ್ಯಾಂಕ್ ಕಾಲೋನಿ ಮತ್ತು ಅಲೆಗ್ಸ್ಯಾಂಡರ್ ಲೇ ಔಟ್
  • ಶ್ರೀ ಶೈಲ ಬಡಾವಣೆ ಹಾಗೂ ವೆಂಕಟಾದ್ರಿ ಬಡಾವಣೆ
  • ಸರೋಜ ಬಾಯಿ ಕಲ್ಯಾಣ ಮಂಟಪದ ಸುತ್ತಮುತ್ತಲಿನ ಬನಶಂಕರಿ ಬಡಾವಣೆ
  • ಬಸವೇಶ್ವರ ಆಸ್ಪತ್ರೆ ಆವರಣ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು
  • ಡಾನ್‍ಬೋಸ್ಕೋ ಡಿಗ್ರಿ ಕಾಲೇಜು ಹಾಗೂ ಶ್ರೀರಾಮ ಕಲ್ಯಾಣ ಮಂಟಪದ ಹಿಂಭಾಗ
  • ವೆಂಕಟೇಶ್ವರ ಬಡಾವಣೆ, ಸಾಯಿ ಸಿಟಿ 1 ಮತ್ತು ಸಾಯಿ ಸಿಟಿ 2
    ​ಚಳ್ಳಕೆರೆ ರಸ್ತೆಯ ಎಸ್.ವಿ. ನಗರ ಮತ್ತು ಅದರ ಆಸುಪಾಸಿನ ಸ್ಥಳಗಳು.

ಬೆಸ್ಕಾಂ ಅಧಿಕಾರಿಗಳ ಮನವಿ:

ವಿದ್ಯುತ್ ಲೈನ್‌ಗಳ ಸುಧಾರಣೆ ಹಾಗೂ ತುರ್ತು ನಿರ್ವಹಣೆಗಾಗಿ ಈ ಕ್ರಮ ಅನಿವಾರ್ಯವಾಗಿದ್ದು, ನಿಗದಿಪಡಿಸಿದ ಸಮಯದಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ. ಗ್ರಾಹಕರು ಮುನ್ನೆಚ್ಚರಿಕೆಯಾಗಿ ತಮ್ಮ ದಿನನಿತ್ಯದ ನೀರಿನ ಅಗತ್ಯ ಹಾಗೂ ಇತರೆ ಕೆಲಸಗಳನ್ನು ಈ ಸಮಯಕ್ಕಿಂತ ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಕೋರಲಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp