ಚಿತ್ರದುರ್ಗ: ಮಾ.14, 15ರಂದು ತಾಳಕಟ್ಟ ಶ್ರೀ ಕರಿಯಮ್ಮ ದೇವಿಯ ಮಹಾ ರಥೋತ್ಸವ!

—Advertisement—

📍 ದಾವಣಗೆರೆ ದಕ್ಷಿಣ

ಉಪಸಮರ - 2026

ಮಹಾ ಕದನ: ಯಾರಿಗೆ ಒಲಿಯಲಿದೆ ಟಿಕೆಟ್?

Samarth Jabbar Vinay Ajay Yashwanth
ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್ ➔

ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ರಾಮಗಿರಿ ಹೋಬಳಿಯ ತಾಳಕಟ್ಟ ಗ್ರಾಮದಲ್ಲಿ ‘ಶ್ರೀ ಕರಿಯಮ್ಮ ದೇವಿಯ ರಥೋತ್ಸವ’ದ ಸಡಗರ ಮನೆಮಾಡಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದ್ದು, ಪ್ರಮುಖ ಕಾರ್ಯಕ್ರಮಗಳಾದ ಮಹಾ ರಥೋತ್ಸವ ಮತ್ತು ಹಣ್ಣಿನ ಸೇವೆ ಮಾರ್ಚ್ 14 (ಶನಿವಾರ) ಹಾಗೂ 15 (ಭಾನುವಾರ) ರಂದು ನಡೆಯಲಿವೆ. ವಾರಾಂತ್ಯದ ಈ ಎರಡು ದಿನಗಳ ಕಾಲ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಮಾ.14ರಂದು ಅದ್ದೂರಿ ರಥೋತ್ಸವ ಹಾಗೂ ‘ಸಿಡಿ’ ಉತ್ಸವ

ಮಾರ್ಚ್ 14ನೇ ತಾರೀಕು ಶನಿವಾರ ಬೆಳಿಗ್ಗೆ 9.00 ಗಂಟೆಯಿಂದ 11.30ರ ಶುಭಲಗ್ನದಲ್ಲಿ ಶ್ರೀ ಕರಿಯಮ್ಮ ದೇವಿಯ “ಮಹಾ ರಥೋತ್ಸವ” ಅತ್ಯಂತ ವೈಭವದಿಂದ ಜರುಗಲಿದೆ. ರಥವನ್ನೆಳೆಯಲು ಹಾಗೂ ದೇವಿಯ ಕೃಪೆಗೆ ಪಾತ್ರರಾಗಲು ಸುತ್ತಮುತ್ತಲಿನ ಹಳ್ಳಿಗಳ ಜನಸಾಗರವೇ ತಾಳಕಟ್ಟದತ್ತ ಹರಿದುಬರಲಿದೆ. ಅಂದು ಸಂಜೆ 4.00 ರಿಂದ 5.30ರವರೆಗೆ ನಡೆಯುವ ಸಾಂಪ್ರದಾಯಿಕ “ಸಿಡಿ” ಉತ್ಸವವು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ದೂರದೂರುಗಳಿಂದ ಬರುವ ಎಲ್ಲಾ ಭಕ್ತಾದಿಗಳಿಗೆ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ

ಮಾ.15ರಂದು ದೇವಿಗೆ ವಿಶೇಷ ‘ಹಣ್ಣಿನ ಸೇವೆ’

ಮಾರ್ಚ್ 15ನೇ ತಾರೀಕು ಭಾನುವಾರ ಕೂಡ ಜಾತ್ರೆಯ ಸಂಭ್ರಮ ಮುಂದುವರೆಯಲಿದ್ದು, ಸಂಜೆ 4.00 ರಿಂದ 5.30ರವರೆಗೆ ದೇವಿಗೆ ವಿಶೇಷವಾದ “ಹಣ್ಣಿನ ಸೇವೆ (ದೊಡ್ಡದೆ)” ನೆರವೇರಲಿದೆ. ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು, ಅಂದೂ ಸಹ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಇರಲಿದೆ.

ಮೂರು ದೇವರುಗಳ ಆಗಮನದ ವಿಶೇಷ

ಜಾತ್ರೆಯ ಮತ್ತೊಂದು ವಿಶೇಷವೆಂದರೆ, ಮಾರ್ಚ್ 13ರ ಶುಕ್ರವಾರದಂದೇ ಸಿಂಗೇನಹಳ್ಳಿಯ ಶ್ರೀ ಜಾನೇರಂಗನಾಥಸ್ವಾಮಿ, ತಾಳಕಟ್ಟದ ಶ್ರೀ ಗುಳ್ಳಮ್ಮದೇವಿ ಹಾಗೂ ಬಂಗನಕಟ್ಟೆಯ ಶ್ರೀ ಹಳಿಯೂರಮ್ಮದೇವಿ ದೇವರುಗಳು ಆಗಮಿಸಲಿವೆ. ಅಂದು ರಾತ್ರಿ ಭಂಡಾರ ತಣಿಗೆ ಉತ್ಸವ ಮತ್ತು ಕೆಂಡದಾರ್ಚನೆ ನಡೆಯಲಿದ್ದು, ಇದು ಭಕ್ತರಲ್ಲಿ ಇನ್ನಷ್ಟು ಭಕ್ತಿ-ಭಾವ ಮೂಡಿಸಲಿದೆ.

ಸ್ಥಳದ ಮಾಹಿತಿ ಹಾಗೂ ಸ್ವಾಗತ

ತಾಳಕಟ್ಟ ಗ್ರಾಮವು ಹೊಳಲ್ಕೆರೆ ತಾಲೂಕಿನಲ್ಲಿದ್ದು, ರಾಮಗಿರಿಯಿಂದ ದಕ್ಷಿಣಕ್ಕೆ ಕೇವಲ 4 ಕಿ.ಮೀ. ದೂರದಲ್ಲಿದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ತಾಳಕಟ್ಟ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಮಸ್ತ ಭಕ್ತಾದಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp