ದಾವಣಗೆರೆ ದಕ್ಷಿಣ ಬೈ-ಎಲೆಕ್ಷನ್: ಶಾಮನೂರು ಕೋಟೆಗೆ ಮುಸ್ಲಿಂ ಬಂಡಾಯದ ಭೀತಿ! ಅಖಾಡಕ್ಕೆ ಖ್ಯಾತ ಆ್ಯಂಕರ್ ಎಂಟ್ರಿ?

ದಾವಣಗೆರೆ ದಕ್ಷಿಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮತ್ತು ಪತ್ರಕರ್ತೆ ಡಾ. ನಾಝಿಯಾ ಕೌಸರ್ ಅವರ ಭಾವಚಿತ್ರ.
— ದಾವಣಗೆರೆ ದಕ್ಷಿಣ ಉಪಚುನಾವಣೆ: ಶಾಮನೂರು ಕುಟುಂಬದ ಸಮರ್ಥ್ ಶಾಮನೂರು ಮತ್ತು ಪಕ್ಷೇತರ ಸ್ಪರ್ಧೆಯ ಸುಳಿವು ನೀಡಿದ ಡಾ. ನಾಝಿಯಾ ಕೌಸರ್.

—Advertisement—

📍 ದಾವಣಗೆರೆ ದಕ್ಷಿಣ

ಉಪಸಮರ - 2026

ಮಹಾ ಕದನ: ಯಾರಿಗೆ ಒಲಿಯಲಿದೆ ಟಿಕೆಟ್?

Samarth Jabbar Vinay Ajay Yashwanth
ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್ ➔

ದಾವಣಗೆರೆ: ರಾಜ್ಯ ರಾಜಕಾರಣದ ‘ಬೆಣ್ಣೆ ನಗರಿ’ ಎಂದೇ ಖ್ಯಾತಿಯಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಈಗ ಹೈವೋಲ್ಟೇಜ್ ಉಪಚುನಾವಣೆಗೆ ಸಾಕ್ಷಿಯಾಗುತ್ತಿದೆ. ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕ್ರಪ್ಪ ಅವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದಲ್ಲಿ ಈಗ ‘ಕೈ’ ಪಾಳಯಕ್ಕೆ ಸ್ವಪಕ್ಷೀಯರೇ ನುಂಗಲಾರದ ತುತ್ತಾಗಿದ್ದಾರೆ.

ಶಾಮನೂರು ಕುಟುಂಬಕ್ಕೆ ಎದುರಾಯ್ತು ‘ಸ್ವಜಾತಿ’ ವರ್ಸಸ್ ‘ಅಲ್ಪಸಂಖ್ಯಾತ’ ಫೈಟ್!

ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಾಗಿದೆ. ಶಾಮನೂರು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಲವು ತೋರುತ್ತಿದೆ. ಆದರೆ, ಸುಮಾರು 80,000ಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ಈ ಕ್ಷೇತ್ರದಲ್ಲಿ ಈ ಬಾರಿ “ನಮಗೇಕೆ ಪ್ರಾತಿನಿಧ್ಯವಿಲ್ಲ?” ಎಂಬ ಬಂಡಾಯದ ಧ್ವನಿ ಜೋರಾಗಿದೆ.

ಟ್ವಿಸ್ಟ್ ನೀಡಿದ ಡಾ. ನಾಝಿಯಾ ಕೌಸರ್ ಎಂಟ್ರಿ!

ಕಾಂಗ್ರೆಸ್‌ನ ಈ ಆಂತರಿಕ ಅಸಮಾಧಾನದ ಲಾಭ ಪಡೆಯಲು ಸಜ್ಜಾಗಿರುವುದು ಪ್ರಖ್ಯಾತ ಪತ್ರಕರ್ತೆ, ಸಂಶೋಧಕಿ ಹಾಗೂ ಜನಪ್ರಿಯ ಆ್ಯಂಕರ್ ಡಾ. ನಾಝಿಯಾ ಕೌಸರ್. ಮೂಲಗಳ ಪ್ರಕಾರ, ನಾಝಿಯಾ ಕೌಸರ್ ಅವರು ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

  • ವಿದ್ಯಾವಂತ ಮಹಿಳಾ ನಾಯಕತ್ವ: ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿರುವ ಯುವಕರು ಮತ್ತು ಮಹಿಳೆಯರು ನಾಝಿಯಾ ಪರ ನಿಲ್ಲುವ ಸಾಧ್ಯತೆ ಇದೆ.

  • ಧೈರ್ಯಶಾಲಿ ಧ್ವನಿ: ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳ ಬಗ್ಗೆ ಖಡಕ್ ಆಗಿ ಮಾತನಾಡುವ ನಾಝಿಯಾ ಎಂಟ್ರಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ಗೆ ಕನ್ನ ಹಾಕುವ ಆತಂಕ ಮೂಡಿಸಿದೆ.

ಕಾಂಗ್ರೆಸ್‌ಗೆ ಏಕಿದೆ ‘ಬಿಸಿತುಪ್ಪ’ದ ಪರಿಸ್ಥಿತಿ?

ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಮತಗಳೇ ಗೆಲುವಿನ ನಿರ್ಣಾಯಕ ಶಕ್ತಿ. ಒಂದು ವೇಳೆ ನಾಝಿಯಾ ಕೌಸರ್ ಅವರು ಸ್ಪರ್ಧಿಸಿದರೆ, ಮುಸ್ಲಿಂ ಮತಗಳು ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಹಿನ್ನಡೆಯಾಗುವ ಭೀತಿ ಎದುರಾಗಿದೆ. “ನಮಗೆ ಕೇವಲ ಮತ ಹಾಕುವ ಯಂತ್ರಗಳನ್ನಾಗಿ ಮಾಡಬೇಡಿ, ನಮ್ಮವರಿಗೂ ಅಧಿಕಾರ ನೀಡಿ” ಎನ್ನುತ್ತಿರುವ ಸ್ಥಳೀಯ ಮುಸ್ಲಿಂ ನಾಯಕರು ಕಾಂಗ್ರೆಸ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp