,

ದಾವಣಗೆರೆಯ ವೈದ್ಯಲೋಕಕ್ಕೆ ಐತಿಹಾಸಿಕ ಕ್ಷಣ: ಹಿಮೋಫೀಲಿಯಾ ರೋಗಿಗಳ ‘ಸಂಜೀವಿನಿ’ ಡಾ. ಸುರೇಶ್ ಹನಗವಾಡಿಗೆ ಒಲಿದ ‘ಪದ್ಮಶ್ರೀ’

Author Picture
Published On: January 25, 2026

—Advertisement—

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಗೆ ರಾಷ್ಟ್ರಮಟ್ಟದ ಕೀರ್ತಿ ಲಭಿಸಿದೆ. ರಕ್ತಸ್ರಾವ ಕಾಯಿಲೆ (ಹಿಮೋಫೀಲಿಯಾ) ಪೀಡಿತರ ಬಾಳಿನಲ್ಲಿ ನಗು ಮೂಡಿಸುತ್ತಿರುವ, ದಾವಣಗೆರೆಯ ಹೆಮ್ಮೆಯ ವೈದ್ಯ ಡಾ. ಸುರೇಶ್ ಹನಗವಾಡಿ ಅವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಘೋಷಣೆಯಾಗಿದೆ.

2000ಕ್ಕೂ ಹೆಚ್ಚು ಕುಟುಂಬಗಳ ಕಣ್ಣೀರು ಒರೆಸಿದ ಕೈ

ಇದು ಕೇವಲ ವೈದ್ಯರೊಬ್ಬರಿಗೆ ಸಿಕ್ಕ ಗೌರವವಲ್ಲ, ನಿಸ್ವಾರ್ಥ ಸೇವೆಗೆ ಸಿಕ್ಕ ಮನ್ನಣೆ. ದಾವಣಗೆರೆ ನಗರದಲ್ಲಿ ‘ಕರ್ನಾಟಕ ಹಿಮೋಫಿಲಿಯಾ ಸೊಸೈಟಿಕರ್ನಾಟಕ ಹಿಮೋಫಿಲಿಯಾ ಸೊಸೈಟಿ‘ ಸ್ಥಾಪಿಸಿ, ಆ ಮೂಲಕ ಸುಮಾರು 2000ಕ್ಕೂ ಅಧಿಕ ಹಿಮೋಫೀಲಿಯಾ ಪೀಡಿತರಿಗೆ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸುತ್ತಿದ್ದಾರೆ. ಹಿಮೋಫೀಲಿಯಾ ಎಂದರೆ ಏನೆಂದೇ ತಿಳಿಯದ ಕಾಲದಲ್ಲಿ, ಈ ಕಾಯಿಲೆಯ ವಿರುದ್ಧ ದೊಡ್ಡ ಆಂದೋಲನವನ್ನೇ ರೂಪಿಸಿದ ಕೀರ್ತಿ ಡಾ. ಸುರೇಶ್ ಅವರಿಗೆ ಸಲ್ಲುತ್ತದೆ.

ನೋವಿನಿಂದ ಹುಟ್ಟಿದ ಸೇವೆ

ಡಾ. ಸುರೇಶ್ ಹನಗವಾಡಿ ಅವರ ಈ ಸಾಧನೆಯ ಹಾದಿ ಸುಲಭದ್ದಾಗಿರಲಿಲ್ಲ. ಸ್ವತಃ ಹಿಮೋಫೀಲಿಯಾ ಸಮಸ್ಯೆಯಿಂದ ಬಳಲುತ್ತಿರುವ ಅವರು, ಇದೇ ಕಾಯಿಲೆಯಿಂದ ತಮ್ಮ ಸೋದರ ಮಾವನನ್ನು ಕಳೆದುಕೊಂಡಿದ್ದರು. “ಸುರೇಶ, ನೀನು ಡಾಕ್ಟರ್ ಆಗಿ ಈ ರೋಗಕ್ಕೆ ಮದ್ದು ಕೊಡಬೇಕು” ಎಂಬ ಮಾವನ ಕೊನೆಯ ಮಾತು ಅವರ ಬದುಕಿನ ಧ್ಯೇಯವಾಯಿತು. ಆ ನೋವನ್ನೇ ಶಕ್ತಿಯನ್ನಾಗಿಸಿಕೊಂಡು ಸಾವಿರಾರು ರೋಗಿಗಳ ಪ್ರಾಣ ಉಳಿಸಿದ್ದಾರೆ.

ಎಸ್.ಪಿ.ಬಿ ನೀಡಿದ್ದ ಆಸರೆ

ಈ ಸಮಾಜಮುಖಿ ಕಾರ್ಯಕ್ಕೆ ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಬೆಂಬಲವೂ ಇತ್ತು ಎಂಬುದು ಸ್ಮರಣೀಯ. ಸಂಸ್ಥೆಯ ಆರಂಭಿಕ ದಿನಗಳಲ್ಲಿ ನಿಧಿಯ ಕೊರತೆ ಎದುರಾದಾಗ, ದಾವಣಗೆರೆಗೆ ಬಂದು ಸಂಗೀತ ಕಾರ್ಯಕ್ರಮ ನಡೆಸಿ, ಸಂಸ್ಥೆಗೆ ಆರ್ಥಿಕ ಶಕ್ತಿ ತುಂಬಿದ್ದರು.

ಅಭಿನಂದನೆಗಳ ಮಹಾಪೂರ

ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಸಾವಿರಾರು ಬಡ ರೋಗಿಗಳಿಗೆ ಆಶಾಕಿರಣವಾಗಿರುವ ಡಾ. ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ದಾವಣಗೆರೆಯ ಜನತೆಯಲ್ಲಿ ಸಂತಸ ಮೂಡಿಸಿದೆ. ವೈದ್ಯಕೀಯ ಕ್ಷೇತ್ರ ಹಾಗೂ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

"ಮಧ್ಯ ಕರ್ನಾಟಕ ಲೈವ್ (Madhyakarnataka.live) ಕರ್ನಾಟಕದ ಹೃದಯಭಾಗದ ನೈಜ, ನಿಖರ ಮತ್ತು ಕ್ಷಣ ಕ್ಷಣದ ಸುದ್ದಿಗಳಿಗಾಗಿ ಮೀಸಲಾದ ಡಿಜಿಟಲ್ ಸುದ್ದಿ ವೇದಿಕೆಯಾಗಿದೆ. ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳ ಸ್ಥಳೀಯ ಸಮಸ್ಯೆಗಳು, ರಾಜಕೀಯ, ಕೃಷಿ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಜಗತ್ತಿಗೆ ತಲುಪಿಸುವುದು ನಮ್ಮ ಗುರಿ. ನಾವು ಕೇವಲ ಸುದ್ದಿಯನ್ನಷ್ಟೇ ಅಲ್ಲ, ಜನರ ಧ್ವನಿಯಾಗಲು ಬಯಸುತ್ತೇವೆ."… Read More

Related News

Leave a Comment

Home
Web Stories
Instagram
WhatsApp