KEA CET ಪರೀಕ್ಷೆ: ಅಭ್ಯರ್ಥಿಗಳಿಗೆ ಕಡ್ಡಾಯ ವಸ್ತ್ರ ಸಂಹಿತೆ ಮತ್ತು ಮಾರ್ಗಸೂಚಿ ಪ್ರಕಟ

Official dress code instructions for male and female candidates appearing for KEA CET exams in Karnataka.

—Advertisement—

ಚಿತ್ರದುರ್ಗ: ಇದೇ ಏಪ್ರಿಲ್ 23 ಮತ್ತು 24ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (CET) ಪಾರದರ್ಶಕವಾಗಿ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ವಿಶೇಷ ವಸ್ತ್ರ ಸಂಹಿತೆ (Dress Code) ಮತ್ತು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಪುರುಷ ಅಭ್ಯರ್ಥಿಗಳಿಗೆ ನಿಯಮಗಳು

  • ಶರ್ಟ್: ಪೂರ್ಣ ತೋಳಿನ ಶರ್ಟ್ ನಿಷೇಧಿಸಲಾಗಿದೆ. ಕಡ್ಡಾಯವಾಗಿ ಅರ್ಧ ತೋಳಿನ (Half Sleeves) ಸಾಧಾರಣ ಶರ್ಟ್ ಅಥವಾ ಕಾಲರ್ ಇಲ್ಲದ ಟಿ-ಶರ್ಟ್ ಧರಿಸಬೇಕು.
  • ಪ್ಯಾಂಟ್: ಜೀನ್ಸ್ ಪ್ಯಾಂಟ್ ಮತ್ತು ಕುರ್ತಾ ಪೈಜಾಮ ಧರಿಸುವಂತಿಲ್ಲ. ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು.
  • ಪಾದರಕ್ಷೆ: ಶೂಗಳನ್ನು ಧರಿಸಲು ಅವಕಾಶವಿಲ್ಲ. ತೆಳುವಾದ ಅಡಿಭಾಗವಿರುವ ಚಪ್ಪಲಿ ಅಥವಾ ಸ್ಯಾಂಡಲ್ ಮಾತ್ರ ಧರಿಸಬೇಕು.
  • ಆಭರಣ: ಯಾವುದೇ ರೀತಿಯ ಲೋಹದ ಸರ, ಉಂಗುರ ಅಥವಾ ಕಡಗಗಳನ್ನು ಧರಿಸುವಂತಿಲ್ಲ.

ಮಹಿಳಾ ಅಭ್ಯರ್ಥಿಗಳಿಗೆ ನಿಯಮಗಳು

  • ಉಡುಪು: ಜೀನ್ಸ್ ಪ್ಯಾಂಟ್ ಅಥವಾ ಹೂವಿನ ವಿನ್ಯಾಸ, ಕಸೂತಿ ಕೆಲಸವಿರುವ ಬಟ್ಟೆಗಳನ್ನು ಧರಿಸಬಾರದು. ಅರ್ಧ ತೋಳಿನ ಸರಳ ಉಡುಪುಗಳಿಗೆ ಮಾತ್ರ ಅನುಮತಿ ಇದೆ.
  • ಪಾದರಕ್ಷೆ: ಹೈ-ಹೀಲ್ಸ್ (ಎತ್ತರ ಹಿಮ್ಮಡಿ) ಚಪ್ಪಲಿಗಳನ್ನು ನಿಷೇಧಿಸಲಾಗಿದೆ. ತೆಳುವಾದ ಅಡಿಭಾಗದ ಚಪ್ಪಲಿ ಬಳಸಿ.
  • ಆಭರಣ: ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಉಳಿದ ಯಾವುದೇ ಲೋಹದ ಆಭರಣಗಳಿಗೆ ಅನುಮತಿಯಿಲ್ಲ.

ಪರೀಕ್ಷಾ ಕೇಂದ್ರದಲ್ಲಿ ನಿಷೇಧಿತ ವಸ್ತುಗಳು

​ಪರೀಕ್ಷಾ ಕೊಠಡಿಯೊಳಗೆ ಈ ಕೆಳಗಿನ ವಸ್ತುಗಳನ್ನು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:

    • ಎಲೆಕ್ಟ್ರಾನಿಕ್ ಸಾಧನಗಳು: ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಬ್ಲೂಟೂತ್, ಸ್ಮಾರ್ಟ್ ವಾಚ್.
    • ಇತರ ವಸ್ತುಗಳು: ಪೆನ್ಸಿಲ್, ಎರೇಸರ್, ಜ್ಯಾಮಿತಿ ಬಾಕ್ಸ್, ಲಾಗ್ ಟೇಬಲ್, ಟೋಪಿ ಮತ್ತು ಮಾಸ್ಕ್.
    • ಆಹಾರ ಮತ್ತು ನೀರು: ತಿಂಡಿ ತಿನಿಸುಗಳು ಮತ್ತು ಬಣ್ಣದ/ಲೋಹದ ನೀರಿನ ಬಾಟಲಿಗಳಿಗೆ ಅವಕಾಶವಿಲ್ಲ (ಕೇಂದ್ರದಲ್ಲೇ ಕುಡಿಯುವ ನೀರಿನ ವ್ಯವಸ್ಥೆ ಇರುತ್ತದೆ).

ಗಮನಿಸಿ: ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ (Hall Ticket) ಮತ್ತು ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ (ID Proof) ತರುವುದು ಕಡ್ಡಾಯ. ವಸ್ತ್ರ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ಕೆ.ತಿಮ್ಮಯ್ಯ ಎಚ್ಚರಿಸಿದ್ದಾರೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp