ಮಧ್ಯ ಕರ್ನಾಟಕದ ಹೆಮ್ಮೆಯ ನಾಯಕನಹಟ್ಟಿ ರಥೋತ್ಸವ: ಭಕ್ತರ ಅನುಕೂಲಕ್ಕೆ ವಿಶೇಷ KSRTC ಬಸ್ ಸಂಚಾರ

ನಾಯಕನಹಟ್ಟಿ ರಥೋತ್ಸವ nayakanahatti-rathotsava-ksrtc-special-bus

—Advertisement—

ನಾಯಕನಹಟ್ಟಿ ರಥೋತ್ಸವ: ಮಧ್ಯ ಕರ್ನಾಟಕದ ಜನರ ಅಚ್ಚುಮೆಚ್ಚಿನ, ಶಕ್ತಿ ಮತ್ತು ಭಕ್ತಿಯ ಸಂಗಮವಾದ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಬಾರಿಯ ಜಾತ್ರೆಗೆ ಬರುವ ಭಕ್ತರಿಗೊಂದು ಸಿಹಿ ಸುದ್ದಿ! ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಭಕ್ತಾದಿಗಳ ಅನುಕೂಲಕ್ಕಾಗಿ ಚಿತ್ರದುರ್ಗ ಸಾರಿಗೆ ಇಲಾಖೆಯು ವಿಶೇಷ ಬಸ್‌ಗಳ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

ನಾಯಕನಹಟ್ಟಿ ಜಾತ್ರೆ ಎಂದರೆ ಅದು ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ, ಅದೊಂದು ನಾಡಿನ ಸಂಸ್ಕೃತಿಯ ಅನಾವರಣ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬರುವ ನಿಮಗೆ ಯಾವುದೇ ಪ್ರಯಾಣದ ಅಡಚಣೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.

ಜಾತ್ರೆಯ ಸಂಭ್ರಮಕ್ಕೆ ಸಾರಿಗೆ ಇಲಾಖೆಯ ಸಜ್ಜು: ಎಲ್ಲಿಂದ, ಎಲ್ಲಿಗೆ?

ಮಾರ್ಚ್ 6ರಂದು ನಡೆಯಲಿರುವ ಈ ಭವ್ಯ ರಥೋತ್ಸವದ ಹಿನ್ನೆಲೆಯಲ್ಲಿ, ಮಾರ್ಚ್ 5 ರಿಂದ 7ನೇ ತಾರೀಖಿನವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಬಸ್ ಸೌಲಭ್ಯವನ್ನು ಒದಗಿಸುತ್ತಿದೆ. ನಿಮ್ಮ ಊರಿನಿಂದ ನಾಯಕನಹಟ್ಟಿಗೆ ಬರುವ ಬಸ್‌ಗಳ ಮಾರ್ಗ ವಿವರ ಇಲ್ಲಿದೆ:

  • ಚಿತ್ರದುರ್ಗ & ಚಳ್ಳಕೆರೆ ಮಾರ್ಗ: ಈ ಮಾರ್ಗದಲ್ಲಿ ಬರುವ ಬಸ್‌ಗಳು ಬೆಳಗಟ್ಟ ಹಾಗೂ ಹಾಯ್ಕಲ್ ಮೂಲಕ ಸಂಚರಿಸಲಿವೆ.

  • ಚಳ್ಳಕೆರೆ ಮಾರ್ಗ: ಚಳ್ಳಕೆರೆಯಿಂದ ಹೊರಡುವ ಕೆಲವು ಬಸ್‌ಗಳು ನರ‍್ಲಗುಂಟೆ ಮೂಲಕವೂ ಕಾರ್ಯಾಚರಣೆ ಮಾಡಲಿವೆ.

  • ಹಿರಿಯೂರು ಮಾರ್ಗ: ಹಿರಿಯೂರಿನಿಂದ ಹೊರಡುವ ಬಸ್‌ಗಳು ಸಾಣಿಕೆರೆ, ಚಳ್ಳಕೆರೆ ಮತ್ತು ನರ‍್ಲಗುಂಟೆ ಮಾರ್ಗವಾಗಿ ನಾಯಕನಹಟ್ಟಿ ತಲುಪಲಿವೆ.

  • ಪರುಶುರಾಂಪುರ ಮಾರ್ಗ: ನಾಯಕನಹಟ್ಟಿ ಹಾಗೂ ಪರುಶುರಾಂಪುರದ ನಡುವಿನ ಬಸ್‌ಗಳು ಚಳ್ಳಕೆರೆಯ ಮೂಲಕ ಸಂಚರಿಸಲಿವೆ.

ಘಟಕಗಳ ಮಾಹಿತಿ: ಈ ವಿಶೇಷ ಬಸ್‌ಗಳು ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು ಹಾಗೂ ಪಾವಗಡ ಘಟಕಗಳಿಂದ ಕಾರ್ಯಾಚರಿಸಲಿವೆ.

Read Must: ನಾಯಕನಹಟ್ಟಿ ಜಾತ್ರೆಗೆ ಮೈಸೂರು ದಸರಾ ಮಾದರಿ ದೀಪಾಲಂಕಾರ! ಮಾ.6ಕ್ಕೆ ಐತಿಹಾಸಿಕ ರಥೋತ್ಸವ; ಸಕಲ ಸಿದ್ಧತೆಗೆ ಸೂಚನೆ

 ನಾಯಕನಹಟ್ಟಿರಥೋತ್ಸವಕ್ಕೆ ಕಳಸಾರೋಹಣ: ಭಕ್ತಿ-ಭಾವದ ದರ್ಶನ

 ನಾಯಕನಹಟ್ಟಿ ರಥೋತ್ಸವ (ಜಾತ್ರೆಯ) ಸಂಭ್ರಮ ಈಗಾಗಲೇ ಶುರುವಾಗಿದೆ. ಸೋಮವಾರವಷ್ಟೇ ದೊಡ್ಡ ರಥಕ್ಕೆ ಸಾಂಪ್ರದಾಯಿಕವಾಗಿ, ಭಕ್ತಿಪೂರ್ವಕವಾಗಿ ಕಳಸ ಪ್ರತಿಷ್ಠಾಪನೆ ನೆರವೇರಿದೆ.

  • ಸಾಂಪ್ರದಾಯಿಕ ಮೆರವಣಿಗೆ: ಗ್ರಾಮದ ಬಾಬುದಾರರು ಹಾಗೂ ದೈವಸ್ಥರು ಪಟ್ಟಣದ ಒಳಮಠದಿಂದ ಕಳಸವನ್ನು ಮಂಗಲವಾದ್ಯಗಳೊಂದಿಗೆ ದೊಡ್ಡ ರಥದ ಬಳಿ ತಂದರು.

  • ಶಾಸ್ತ್ರೋಕ್ತ ಪೂಜೆ: ಕಂಬಳಿಯ ಗದ್ದುಗೆಯ ಮೇಲಿಟ್ಟು ಶಾಸ್ತ್ರೋಕ್ತವಾಗಿ ಪೂಜಿಸಲಾಯಿತು.

  • ಕಳಸಾರೋಹಣ: ಸುಮಾರು 45 ಕೆ.ಜಿ ತೂಕ ಹಾಗೂ 6 ಅಡಿ ಎತ್ತರದ ಈ ನೂತನ ಕಳಸವನ್ನು ಹಗ್ಗದ ಸಹಾಯದಿಂದ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು.

ಈ ಕಳಸ ಪ್ರತಿಷ್ಠಾಪನೆಯೊಂದಿಗೆ ಜಾತ್ರೆಗೆ ಅಧಿಕೃತವಾಗಿ ಚಾಲನೆ ದೊರೆತಿದೆ. ಭಕ್ತರ ಜಯಘೋಷಗಳು ಮುಗಿಲುಮುಟ್ಟಿದ್ದವು. ಇದಾದ ನಂತರ ರಥಕ್ಕೆ ವಿವಿಧ ಬಣ್ಣಗಳ ಭಾವುಟಗಳನ್ನು ಜೋಡಿಸುವ ಕಾರ್ಯ ನಡೆಯಲಿದೆ.


ಸಾರಿಗೆ ಇಲಾಖೆಯ ಮನವಿ: ಸಾರ್ವಜನಿಕರು ಹಾಗೂ ಭಕ್ತಾದಿಗಳು ಯಾವುದೇ ತೊಂದರೆಯಿಲ್ಲದೆ ಜಾತ್ರೆಗೆ ಆಗಮಿಸಲು ಈ ವಿಶೇಷ ಬಸ್‌ಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಬಾರಿಯ ಜಾತ್ರೆಗೆ ನೀವು ಯಾವ ಊರಿನಿಂದ, ಯಾವ ಮಾರ್ಗವಾಗಿ ಬರುತ್ತಿದ್ದೀರಿ? ನಿಮ್ಮ ಅನಿಸಿಕೆಗಳನ್ನು ಕೆಳಗೆ ಹಂಚಿಕೊಳ್ಳಿ!

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

madhayakarnatakalive@gmail.com

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Leave a Comment

Home
Web Stories
Instagram
WhatsApp