ಪ್ರಾಮಾಣಿಕತೆಗೆ ಸಾಟಿಯಿಲ್ಲ: ಆಟೋದಲ್ಲಿ ಬಿಟ್ಟು ಹೋಗಿದ್ದ ₹7.5 ಲಕ್ಷ ಮೌಲ್ಯದ ಚಿನ್ನದ ಸರ ಮರಳಿಸಿದ ಚಾಲಕ!

Honest auto driver Mallikarjun returning a lost gold chain to a couple at Nayakanahatti police station

—Advertisement—

ನಾಯಕನಹಟ್ಟಿ: “ಪ್ರಾಮಾಣಿಕತೆ ಎಂಬುದು ಮಾರಾಟಕ್ಕಿರುವ ವಸ್ತುವಲ್ಲ” ಎಂಬುದನ್ನು ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಆಟೋ ಚಾಲಕರೊಬ್ಬರು ಸಾಬೀತುಪಡಿಸಿದ್ದಾರೆ. ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮರಳಿಸುವ ಮೂಲಕ ಚಾಲಕ ಮಲ್ಲಿಕಾರ್ಜುನ್ ಮಾನವೀಯತೆ ಮೆರೆದಿದ್ದಾರೆ.

ಘಟನೆಯ ವಿವರ:

ಮಹದೇವಪುರದಿಂದ ಅನ್ಯ ಊರಿಗೆ ತೆರಳಲು ಬಂದಿದ್ದ ದಂಪತಿಗಳು ನಾಯಕನಹಟ್ಟಿಯಲ್ಲಿ ಮಲ್ಲಿಕಾರ್ಜುನ್ ಅವರ ಆಟೋ ಹತ್ತಿದ್ದರು. ನಿಲ್ದಾಣದಲ್ಲಿ ಇಳಿಯುವ ಆತುರದಲ್ಲಿ ದಂಪತಿಗಳು ತಾವು ತಂದಿದ್ದ ಬ್ಯಾಗನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ಈ ಬ್ಯಾಗ್‌ನಲ್ಲಿ ಸುಮಾರು 7.5 ತೊಲ ತೂಕದ (ಅಂದಾಜು 7.50 ಲಕ್ಷ ರೂಪಾಯಿ ಮೌಲ್ಯದ) ಚಿನ್ನದ ಮಾಂಗಲ್ಯ ಸರವಿತ್ತು.

ದಂಪತಿಗಳನ್ನು ಇಳಿಸಿ ಮುಂದೆ ಸಾಗುತ್ತಿದ್ದ ಚಾಲಕ ಮಲ್ಲಿಕಾರ್ಜುನ್ ಅವರಿಗೆ ಸೀಟಿನ ಮೇಲೆ ಬ್ಯಾಗ್ ಇರುವುದು ಕಂಡುಬಂದಿದೆ. ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ಬೆಲೆಬಾಳುವ ಚಿನ್ನದ ಒಡವೆ ಇರುವುದು ಗೊತ್ತಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ದಂಪತಿಗಳಿಗಾಗಿ ಇಡೀ ಬಸ್ ನಿಲ್ದಾಣ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ.

ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಸ್ತಾಂತರ:

ದಂಪತಿಗಳು ಪತ್ತೆಯಾಗದಿದ್ದಾಗ ಮಲ್ಲಿಕಾರ್ಜುನ್ ಅವರು ಕಿಂಚಿತ್ತೂ ಆಸೆ ಪಡದೆ ನೇರವಾಗಿ ನಾಯಕನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ಪೊಲೀಸರು ತಕ್ಷಣವೇ ವಾರಸುದಾರರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಬಳಿಕ ಠಾಣೆಯಲ್ಲೇ ಮಾಲೀಕರಾದ ಸರಸ್ವತಿ ಅವರಿಗೆ ಚಾಲಕನ ಕೈಯಿಂದಲೇ ಬಂಗಾರದ ಸರವನ್ನು ಹಸ್ತಾಂತರಿಸಲಾಯಿತು.

​”ಬಾಡಿಗೆ ಮುಗಿಸಿ ಹೋದ ಮೇಲೆ ಬ್ಯಾಗ್ ಇರುವುದು ತಿಳಿಯಿತು. ಅದರಲ್ಲಿ ಬಂಗಾರ ಕಂಡ ತಕ್ಷಣ ಅದನ್ನು ವಾಪಸ್ ನೀಡಬೇಕೆಂದು ನಿರ್ಧರಿಸಿದೆ. ಪೊಲೀಸರ ಸಹಾಯದಿಂದ ಮಾಲೀಕರಿಗೆ ಒಪ್ಪಿಸಿರುವುದು ಸಂತಸ ತಂದಿದೆ,” ಎಂದು ಚಾಲಕ ಮಲ್ಲಿಕಾರ್ಜುನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ತಮ್ಮ ಕಳೆದುಹೋದ ಬಂಗಾರ ಮತ್ತೆ ಸಿಕ್ಕಿದ್ದನ್ನು ಕಂಡು ದಂಪತಿಗಳು ನಿಟ್ಟುಸಿರು ಬಿಟ್ಟಿದ್ದಲ್ಲದೆ, ಚಾಲಕನ ಪ್ರಾಮಾಣಿಕ ಗುಣವನ್ನು ಕಂಡು ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಾಲಕ ಮಲ್ಲಿಕಾರ್ಜುನ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಿಮ್ಮೂರಿನ ವರದಿಗಾರರಾಗಿ! 🎤

ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.

📩 ಸುದ್ದಿ ಕಳುಹಿಸಿ

ಮುಖ್ಯ ಉಪಸಂಪಾದಕರು, ಮಧ್ಯಕರ್ನಾಟಕ.ಲೈವ್ ಭರತ್ ಪಟೇಲ್ ಕೆ.ಎಸ್. ಅವರು 'ಮಧ್ಯಕರ್ನಾಟಕ.ಲೈವ್' ಸುದ್ದಿ ಜಾಲತಾಣದ ಮುಖ್ಯ ಉಪಸಂಪಾದಕರಾಗಿ (Chief Sub-editor) ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು, ಪ್ರಚಲಿತ ವಿದ್ಯಮಾನಗಳು, ಕ್ರೀಡೆ ಹಾಗೂ ರಾಜಕೀಯ ವಿಶ್ಲೇಷಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಾಹಿತ್ಯ ಮತ್ತು ಪುಸ್ತಕ ಓದುವಿಕೆಯಲ್ಲಿ ಅಪಾರ ಒಲವು ಹೊಂದಿರುವ ಭರತ್ ಅವರು, ದಾವಣಗೆರೆ ಮತ್ತು ಚಿತ್ರದುರ್ಗ ಭಾಗದ ಸ್ಥಳೀಯ ಸುದ್ದಿಗಳ ಮೇಲೆ ನಿಖರ ವರದಿಗಳನ್ನು ನೀಡುವಲ್ಲಿ ಬದ್ಧರಾಗಿದ್ದಾರೆ.… Read More

Related News

Home
Web Stories
Instagram
WhatsApp