ದಾವಣಗೆರೆ: ನಗರದ ಪ್ರಮುಖ ಬಡಾವಣೆಗಳು ಹಾಗೂ ವಾಣಿಜ್ಯ ಪ್ರದೇಶಗಳ ಸಾರ್ವಜನಿಕರೇ ಗಮನಿಸಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಬೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕೈಕೊಡುವ ಪ್ರಮುಖ ಪ್ರದೇಶಗಳ ಪಟ್ಟಿ:
ನಿಮ್ಮ ಏರಿಯಾ ಈ ಪಟ್ಟಿಯಲ್ಲಿದೆಯೆ ಎಂದು ಪರಿಶೀಲಿಸಿಕೊಳ್ಳಿ ಮತ್ತು ಮುಂಜಾಗ್ರತಾ ಕ್ರಮವಾಗಿ ನೀರು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಿ:

- ಕೆ.ಬಿ. ಬಡಾವಣೆ (KB Extension)
- ಲಾಯರ್ ರಸ್ತೆ ಹಾಗೂ ದೀಕ್ಷಿತ್ ರಸ್ತೆ
- ಶಿವಪ್ಪ ಸರ್ಕಲ್ ಮತ್ತು ಜಯದೇವ ಸರ್ಕಲ್
- ನಾಯ್ಡು ಹೋಟೆಲ್ ಹಾಗೂ ಸಿಗಂದೂರು ಹೋಟೆಲ್ ಸುತ್ತಮುತ್ತ
- ಸಿದ್ದಮ್ಮ ಪಾರ್ಕ್ ಮತ್ತು ತ್ರಿಶೂಲ್ ರಸ್ತೆ
- ಹಳೇ ಬಸ್ ನಿಲ್ದಾಣ ಹಾಗೂ ಹೈಸ್ಕೂಲ್ ಬಸ್ ನಿಲ್ದಾಣದ ಆಸುಪಾಸು
- ಜಾಯ್ ಆಲುಕ್ಕಾಸ್, ಬಿಗ್ ಬಜಾರ್ ವಾಣಿಜ್ಯ ಸಂಕೀರ್ಣಗಳು
- ಪಿ.ಡಬ್ಲ್ಯೂ.ಡಿ (PWD) ವಸತಿ ಗೃಹಗಳು
- ಆಕ್ಸಿಸ್ ಬ್ಯಾಂಕ್ ಕಟ್ಟಡ ಮತ್ತು ಸುರಭಿ ಅಪಾರ್ಟ್ಮೆಂಟ್
- ರೇಣುಕಾ ಮಂದಿರ ಹಾಗೂ ಈ ಮೇಲಿನ ಪ್ರದೇಶಗಳ ಸುತ್ತಮುತ್ತಲಿನ ಜಾಗಗಳು.
ಸಂಜೆ 5:00 ಗಂಟೆಯ ನಂತರ ಕಾಮಗಾರಿ ಮುಗಿದ ತಕ್ಷಣ ವಿದ್ಯುತ್ ಸಂಪರ್ಕವನ್ನು ಯಥಾಸ್ಥಿತಿಗೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಸಾರ್ವಜನಿಕರು ಬೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸಲು ಕೋರಿದ್ದಾರೆ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
