ದಾವಣಗೆರೆ: ನಗರದ ಕೆಲವು ಪ್ರಮುಖ ಬಡಾವಣೆಗಳಲ್ಲಿ ಇಂದು (ಜೂನ್ 6) ಬೆಸ್ಕಾಂ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಾವಣಗೆರೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಸ್ಕಾಂ ನಗರ ಉಪವಿಭಾಗ-2ರ ವ್ಯಾಪ್ತಿಗೆ ಬರುವ ಯರಗುಂಟ, ಶಿವಾಲಿ ಹಾಗೂ ಶಿವನಗರ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ತುರ್ತು ದುರಸ್ತಿ ಮತ್ತು ನಿರ್ವಹಣಾ ಕೆಲಸಗಳು ನಡೆಯಲಿವೆ. ಹೀಗಾಗಿ ಸಾರ್ವಜನಿಕರು ಬೆಸ್ಕಾಂ ಜೊತೆ ಸಹಕರಿಸಬೇಕಾಗಿ ಕೋರಲಾಗಿದೆ.

ವಿದ್ಯುತ್ ಕೈಕೊಡುವ ಸಮಯ:
- ದಿನಾಂಕ: 06 ಜೂನ್ 2026 (ಶನಿವಾರ)
- ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ (ಒಟ್ಟು 6 ಗಂಟೆಗಳು)
ಎಲ್ಲೆಲ್ಲಿ ವಿದ್ಯುತ್ ಇರುವುದಿಲ್ಲ?
ಈ ಕೆಳಗಿನ ಬಡಾವಣೆಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಗದಿತ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
- ಬಿಸ್ಮಿಲ್ಲಾ ನಗರ, ಎಲ್ ಬಿ ಎಸ್ ನಗರ, ಎಸ್ಎಸ್ಎಂ ನಗರ
- ಬಿ ಡಿ ಕಾರ್ಮಿಕರ ಬಡಾವಣೆ, ಶಿವ ನಗರ, ಮಿಲತ್ ಕಾಲೋನಿ
- ಅಜಾದ್ ನಗರ, ಭಾಷಾ ನಗರ, ಚೌಡೇಶ್ವರಿ ನಗರ, ಗಾಂಧಿ ನಗರ
ಬಿ ಏನ್ ಲೇಔಟ್ -1, ಎಸ್.ಪಿ.ಎಸ್ ನಗರ - ಮಂಡಕ್ಕಿ ಬಟ್ಟಿ ಮತ್ತು ಎಸ್.ಟಿ.ಪಿ ಪ್ಲಾಂಟ್ ಸುತ್ತಮುತ್ತಲ ಪ್ರದೇಶಗಳು.
ಮನೆಯಲ್ಲಿ ನೀರು ಸಂಗ್ರಹಣೆ ಹಾಗೂ ಇತರೆ ಅಗತ್ಯ ಕೆಲಸಗಳನ್ನು ಬೆಳಿಗ್ಗೆ 10 ಗಂಟೆಯ ಒಳಗಾಗಿ ಪೂರ್ಣಗೊಳಿಸಿಕೊಳ್ಳಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
