ನ್ಯಾಮತಿ: ತಂದೆಯ ಕುಡಿತದ ಚಟಕ್ಕೆ ಬೇಸತ್ತು 112 ಗೆ ಕರೆ ಮಾಡಿದ್ದ ನ್ಯಾಮತಿ ತಾಲೂಕು ಗ್ರಾಮೀಣ ಭಾಗದ SSLC ವಿದ್ಯಾರ್ಥಿನಿಯ ಧೈರ್ಯಕ್ಕೆ ಇದೀಗ ಸಂಪೂರ್ಣ ಪ್ರತಿಫಲ ಸಿಕ್ಕಿದೆ. ಬಾಲಕಿಯ ಕರೆ ಸ್ವೀಕರಿಸಿದ ಕ್ಷಣಾರ್ಧದಲ್ಲೇ ಕಾರ್ಯಪ್ರವೃತ್ತರಾದ ದಾವಣಗೆರೆ ಜಿಲ್ಲಾಡಳಿತ ಮತ್ತು ನ್ಯಾಮತಿ ಪೊಲೀಸರು, ಕೇವಲ ಸಾಂತ್ವನ ಹೇಳಿ ಸುಮ್ಮನಾಗದೆ, ಆ ಕುಟುಂಬದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಮಾದರಿಯಾಗಿದ್ದಾರೆ.
ಅಧಿಕಾರಿಗಳಿಂದ ‘ಸ್ಪಾಟ್’ ಆಕ್ಷನ್! ಸಾಮಾನ್ಯವಾಗಿ ದೂರು ಬಂದರೆ ವಿಚಾರಣೆ ನಡೆಸುವುದು ವಾಡಿಕೆ. ಆದರೆ, ಇಲ್ಲಿ ಬಾಲಕಿಯ ಶಿಕ್ಷಣದ ಪ್ರಶ್ನೆ ಇದ್ದುದರಿಂದ ತಾಲೂಕು ಆಡಳಿತವೇ ಬಾಲಕಿಯ ಮನೆ ಬಾಗಿಲಿಗೆ ಎಡತಾಕಿದೆ. ದಾವಣಗೆರೆ ಉಪವಿಭಾಗಾಧಿಕಾರಿ (AC) ಎಚ್.ಬಿ. ಚನ್ನಪ್ಪ, ತಹಶೀಲ್ದಾರ್ ಕವಿರಾಜ್ ಎಂ.ಪಿ., ಬಿಇಒ ನಿಂಗಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಮಾ ಅವರನ್ನೊಳಗೊಂಡ ಉನ್ನತ ಮಟ್ಟದ ಅಧಿಕಾರಿಗಳ ತಂಡವೇ ಗ್ರಾಮಕ್ಕೆ ಭೇಟಿ ನೀಡಿತು.
ತೆಗೆದುಕೊಂಡ ಮಹತ್ವದ ಕ್ರಮಗಳೇನು? ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಈ ಕೆಳಗಿನ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ:
📢 Breaking News Updates
ದಿನದ ಪ್ರಮುಖ ಸುದ್ದಿಗಳನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಮರೆಯದೇ ನಮ್ಮ ಗ್ರೂಪ್ ಸೇರಿ!
(Instant Kannada News Updates on your Mobile)
-
ತಂದೆಗೆ ಚಿಕಿತ್ಸೆ (Rehabilitation): ಕೇವಲ ಬುದ್ಧಿವಾದ ಹೇಳಿದರೆ ಸಾಲದು ಎಂದು ಅರಿತ ಅಧಿಕಾರಿಗಳು, ಕುಡಿತದ ಚಟಕ್ಕೆ ದಾಸನಾಗಿರುವ ಬಾಲಕಿಯ ತಂದೆಯನ್ನು ದಾವಣಗೆರೆ ಸಮೀಪದ ‘ಬಾತಿ ತಪೋವನ’ದ ಮದ್ಯವ್ಯಸನ ಮುಕ್ತ ಕೇಂದ್ರಕ್ಕೆ (De-addiction Center) ಸೇರಿಸಲು ಆದೇಶಿಸಿದ್ದಾರೆ. ಇದರಿಂದ ಬಾಲಕಿಯ ಮನೆಯ ವಾತಾವರಣ ಸುಧಾರಿಸಲಿದೆ.
-
ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮ: ಬಾಲಕಿಯ ಪುಸ್ತಕಗಳನ್ನು ತಂದೆ ಸುಟ್ಟು ಹಾಕಿದ್ದರಿಂದ, ಪೊಲೀಸರೇ ಸ್ವಂತ ಹಣದಲ್ಲಿ ಹೊಸ ಪುಸ್ತಕಗಳನ್ನು ಕೊಡಿಸಿದ್ದಾರೆ. ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಲಾಗಿದೆ.
-
ವಸತಿ ವ್ಯವಸ್ಥೆ ಆಫರ್: ಸದ್ಯಕ್ಕೆ ತಂದೆ ಇಲ್ಲದಿದ್ದರೂ ತಾಯಿ ಜೊತೆ ಇರುತ್ತೇನೆ ಎಂದು ಬಾಲಕಿ ಹೇಳಿದ್ದಾಳೆ. ಒಂದು ವೇಳೆ ಮನೆಯಲ್ಲಿ ಓದಲು ತೊಂದರೆಯಾದರೆ, ತಕ್ಷಣವೇ ಬಿಸಿಎಂ ಹಾಸ್ಟೆಲ್ ಅಥವಾ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀಟ್ ನೀಡಲು ಅಧಿಕಾರಿಗಳು ಸ್ಥಳದಲ್ಲೇ ಭರವಸೆ ನೀಡಿದ್ದಾರೆ.
Read also: ಪುಸ್ತಕ ಸುಟ್ಟ ತಂದೆ, ಕಣ್ಣೀರು ಹಾಕಿದ ಮಗಳು! 112ಗೆ ಒಂದೇ ಒಂದು ಕರೆ.. ನ್ಯಾಮತಿ ಪೊಲೀಸರು ಮಾಡಿದ್ದೇನು ಗೊತ್ತಾ?
ವ್ಯವಸ್ಥೆಯ ಬಗ್ಗೆ ಹೆಚ್ಚಿದ ನಂಬಿಕೆ: ಒಂದು ಚಿಕ್ಕ ಮಗು ಮಾಡಿದ ಕರೆಗೆ ಇಡೀ ಸರ್ಕಾರಿ ವ್ಯವಸ್ಥೆಯೇ ಸ್ಪಂದಿಸಿದ ರೀತಿ ಇದೀಗ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನ್ಯಾಮತಿ ಠಾಣೆಯ ಕಾನ್ಸ್ಟೇಬಲ್ ಗಳಾದ ಹೇಮರಾಜ್ ಮತ್ತು ರವಿಕುಮಾರ್ ಅವರ ಮಾನವೀಯತೆ ಹಾಗೂ ಎಸಿ, ತಹಶೀಲ್ದಾರ್ ಅವರ ತ್ವರಿತ ನಡೆಗೆ ಸಾರ್ವಜನಿಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.
ಸಮಸ್ಯೆ ಬಂದಾಗ ಧೈರ್ಯವಾಗಿ 112 ಗೆ ಕರೆ ಮಾಡಿ ಎಂದು ಪೊಲೀಸರು ನೀಡುತ್ತಿದ್ದ ಕರೆಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.
ನಿಮ್ಮೂರಿನ ವರದಿಗಾರರಾಗಿ! 🎤
ನಿಮ್ಮ ಹಳ್ಳಿಯ ಹಬ್ಬದ ಸಡಗರ ಅಥವಾ ಜನರ ಕಷ್ಟ-ಕಾರ್ಪಣ್ಯಗಳನ್ನು ಜಗತ್ತಿಗೆ ತಿಳಿಸಬೇಕೆ? ಹಾಗಿದ್ದರೆ ತಡಮಾಡಬೇಡಿ! ಸುದ್ದಿ, ಫೋಟೋ ಅಥವಾ ವಿಡಿಯೋಗಳನ್ನು ನಮಗೆ ಕಳುಹಿಸಿಕೊಡಿ.
ನಿಮ್ಮೂರಿನ ಧ್ವನಿಯಾಗಲಿದೆ ಮಧ್ಯಕರ್ನಾಟಕ ಲೈವ್.
madhayakarnatakalive@gmail.com
